PODCAST · religion
SriRamachandrapura Matha
by SriRamachandrapura Matha
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
-
383
ಅನ್ನದ ಪರಿಚಯ - ಅನ್ನಂ ಬ್ರಹ್ಮ 31 | Introduction to rice - Annam Brahma 31
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಲ್ಲಾ ಜೀವಗಳಿಗೂ ಅನ್ನವೆಂದರೆ ಆನಂದ, ಅದರ ನೆನಪೇ ಸಂತೋಷ ಕೊಡುವಂಥದ್ದು!*'ಅನ್ನ', ಸೇವಿಸಿದ ಕೂಡಲೇ ದೇಹಕ್ಕೆ ಬಲ ಕೊಡಲು ಶುರುಮಾಡುತ್ತದೆ!*ಆಹಾರವೇ ನಮ್ಮ ಶರೀರವನ್ನು ಧರಿಸಿದೆ*ಬುದ್ಧಿ, ಆಯಸ್ಸು, ಚರ್ಮದ ಬಣ್ಣ, ಓಜಸ್ಸು, ತೇಜಸ್ಸು, ಸತ್ತ್ವ, ಉತ್ಸಾಹ, ಶೋಭೆ - ಇದೆಲ್ಲವನ್ನೂ ಅನ್ನವು ವರ್ಧಿಸುತ್ತದೆ!*ಓಜಸ್ಸನ್ನು ದೇಹದಲ್ಲಿಯೇ ಇರುವ ಒಂದು ಬಗೆಯ ಅಮೃತವೆಂದು ಏಕೆ ಕರೆಯುತ್ತಾರೆ!?*ಓಜಸ್ಸು ಇದ್ದರೆ ನಾವು, ಇಲ್ಲದಿದ್ದರೆ ಸಾವು!*ತುಪ್ಪದ ಬಣ್ಣದ, ಜೇನಿನ ಸವಿಯ, ಅರಳಿನ ಪರಿಮಳದ ಅನುಪಮ ದ್ರವ್ಯ "ಓಜಸ್ಸು"!*ಓಜಸ್ಸು ಕ್ಷೀಣಿಸಿದರೆ ಭಯ, ದೌರ್ಬಲ್ಯ, ಸತತ ಚಿಂತೆ, ತೇಜಸ್ಸು ಹಾನಿ, ಶರೀರ ಒಣಗಿ ಕ್ಷೀಣಿಸಿ, ಕೊನೆಗೆ ಮರಣ!28-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
382
ಅಗ್ನಿಸಂವಾದ - ಅನ್ನಂ ಬ್ರಹ್ಮ 30 | Conversations with Agni - Annam Brahma
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮೂಲಾಗ್ನಿ - ಎಲ್ಲಾ ಅಗ್ನಿಗಳ ಮೂಲ, ಅದು ಅಗೋಚರ!*"ತುಪ್ಪ" ಅಗ್ನಿಯನ್ನು ಉದ್ದೀಪನ ಮಾಡಿ, ಪಿತ್ತವನ್ನು ಶಮನ ಮಾಡುತ್ತದೆ*ನಮ್ಮ 'ಚಿತ್ತ' ಎಷ್ಟು ಆಳಕ್ಕೆ ಇಳಿಯುವುದೋ ಅಷ್ಟು ನಾವು ದೇವತೆಗಳಿಗೆ ಹತ್ತಿರ ಆಗುತ್ತಾ ಹೋಗುತ್ತೇವೆ*ಸಾಧನೆಯಲ್ಲಿ ಧ್ಯಾನ ಮಾರ್ಗಕ್ಕೆ ಇಳಿದಾಗ ಆಹಾರ ಕಡಿಮೆ ಸಾಕಾಗುವುದು*ಸರಿಯಾದ ಸಂಕಲ್ಪ ಮಾಡಿ, ಮನಸ್ಸುನ್ನು ಹಿಡಿತಕ್ಕೆ ಪಡೆದವನಿಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ*ಹಸಿವು ಗೊತ್ತಾಗದವನಿಗೆ "ಊಟ" ಅರ್ಥವಾಗುವುದಿಲ್ಲ!*ಆಹಾರ ಮೊಟ್ಟ ಮೊದಲು ದರ್ಶನ ಮಾತ್ರದಿಂದಲೇ ಸಂತೋಷ ಕೊಡುತ್ತದೆ*ಅನ್ನ ಎಂದರೆ ಆನಂದ!*ಅನ್ನದಲ್ಲಿ ದೇವರ ಲಕ್ಷಣಗಳು ಕಾಣುತ್ತವೆ, ಹಾಗಾಗಿ "ಅನ್ನಂ ಬ್ರಹ್ಮ!"27-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
381
ಉಸಿರಾಟದ ಸುತ್ತಮುತ್ತ - ಅನ್ನಂ ಬ್ರಹ್ಮ 29 | Around the Breath - Annam Brahma 29
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ತರಕಾರಿಗಳನ್ನು ಬೇಯಿಸಿಯೇ ತಿನ್ನಬೇಕೇ?;ಹೆಸರುಬೇಳೆ, ಹೆಸರುಕಾಳು ಕೊಸಂಬರಿ ಏಕೆ ಉತ್ತಮ?*ಉಸಿರಾಟದಲ್ಲಿ ಮೂರು ವಿಧ - ಚಂದ್ರನಾಡಿ, ಸೂರ್ಯನಾಡಿ ಹಾಗೂ ಸುಶುಮ್ನಾನಾಡಿ ಉಸಿರಾಟ!*ಜ್ಯೌತಿಷ ಹಾಗೂ ಸ್ವರಶಾಸ್ತ್ರದಲ್ಲಿ ಉಸಿರಾಟದ ಬಗ್ಗೆ ಏನು ಹೇಳಿದ್ದಾರೆ?*ಉಸಿರು ಬಿಡುವುದು ಮತ್ತು ತೆಗೆದುಕೊಳ್ಳುವುದು ಯಾವ ರೀತಿ ಆಗಬೇಕು?*ಉಸಿರಾಟದ ಮೂಲ ರೂಪವೇ "ಓಂ"!*ಉಸಿರಾಟ ಪ್ರಕ್ರಿಯೆ ಸರಿಯಾಗಿ ಆದರೆ ಜೀವನದಲ್ಲಿ ಆನಂದ, ಸಮಾಧಾನ, ರೋಗಗಳಿಂದ ಮುಕ್ತಿ ಹಾಗೂ ಪಾಪಗಳನ್ನೂ ದೂರ ಮಾಡಲು ಸಾಧ್ಯ*ಅಂತಃಕರಣದಿಂದಲೇ ಸಾಧನೆ; ಅಂತಃಕರಣಕ್ಕೆ ಹತ್ತಿರದ ಉಪಕರಣವೇ "ಶ್ವಾಸ"!26-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
380
ಉಸಿರಾಟವೆಂಬ ಊಟ - ಅನ್ನಂ ಬ್ರಹ್ಮ 28 | Breath as Food - Annam Brahma 28
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮಕ್ಕಳ ಎಂಜಲನ್ನು ತಂದೆತಾಯಂದಿರು ಮತ್ತು ತಂದೆತಾಯಂದಿರ ಎಂಜಲನ್ನು ಮಕ್ಕಳು ಸೇವಿಸಬಾರದು!*ಕಲಿಯುಗದಲ್ಲಿ ಅನರ್ಥಗಳನ್ನು ತಡೆಯಲು ಪರಮಾತ್ಮನು ಅವತಾರ ತಾಳುತ್ತಾನೆಯೇ?*ಉಸಿರನ್ನು ಆಹಾರವೆಂದು ಪರಿಗಣಿಸಬಹುದೇ?*ಉಸಿರಾಟವು ಜಠರಾಗ್ನಿಯನ್ನು ಉದ್ದೀಪನಗೊಳಿಸುತ್ತದೆ!*ಕೋಪ, ಭಯ, ಆತಂಕವಾದಾಗ ತಕ್ಷಣಕ್ಕೆ ಏನು ಮಾಡಬೇಕು??*ಮನಸ್ಸು ಶಾಂತವಾಗಿದ್ದಾಗ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ!*ಆಯಸ್ಸು, ಮೈಬಣ್ಣ, ಬಲ, ಆರೋಗ್ಯ, ಉತ್ಸಾಹ, ಬೆಳವಣಿಗೆ, ಓಜಸ್ಸು, ತೇಜಸ್ಸು - ಎಲ್ಲವೂ ಜಠರಾಗ್ನಿಯ ಮೇಲೆ ಅವಲಂಬಿಸಿದೆ!*ಪ್ರಾಣವಾಯುವಿಗೆ ಸತತ ಊರ್ಧ್ವಗತಿ ಏಕೆ!?*ಒಬ್ಬ ಮನುಷ್ಯನು ಪ್ರತಿದಿನ ಸರಾಸರಿ 21,600 ಬಾರಿ ಉಸಿರಾಟ ಮಾಡುತ್ತಾನೆ!*ಪ್ರಾಣ ದೀರ್ಘವಾಗಿ ಅಪಾನ ಹ್ರಸ್ವವಾಗಬೇಕು!;ಉಸಿರು ತೆಗೆದುಕೊಳ್ಳುವಾಗ ಕಡಿಮೆಯಿರಬೇಕು, ಬಿಡುವ ಉಸಿರು ದೀರ್ಘವಾಗಿರಬೇಕು!25-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
379
ಅಮೃತಪಾನದ ಸುತ್ತಮುತ್ತ - ಅನ್ನಂ ಬ್ರಹ್ಮ 27 | Around the consumption of Amrita (nectar) - Annam Brahma 27
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*"ಉಸಿರು" ~ ಜೀವನದ ಪ್ರತಿನಿಧಿ; ಉಸಿರಾಟ ಸರಿಯಾದರೆ ಜೀವನವೇ ಸರಿಯಾಗುತ್ತದೆ*ನಿದ್ರೆ, ರೋಗ, ಹಸಿವು ಇವುಗಳನ್ನು ಜಯಿಸಬಹುದೇ?!;ಸಾವಿರಾರು ಕಾಲ ಬದುಕುಲು ಸಾಧ್ಯವೇ?*ಯೋಗ ಎಂದರೆ ಸಂಯಮ*"ತುಪ್ಪ" ಸರ್ವಶ್ರೇಷ್ಠ ಆಹಾರ*"ಪ್ರಾಣಾಯಾಮ" ಮಾಡಲು ಹೆಣ್ಣು ಮಕ್ಕಳಿಗೆ ಹೇಳಿಕೊಡುವುದಿಲ್ಲ, ಏಕೆ?*ಯೋಗಾಭ್ಯಾಸ ಮಾಡುವವನಿಗೆ ಹೆಜ್ಜೆ ಹೆಜ್ಜೆಗೂ ಗುರುವಿನ ಆಶೀರ್ವಾದ ~ ಮಾರ್ಗದರ್ಶನ ಬೇಕು*ತೀಕ್ಷ್ಣಾಗ್ನಿ ದೀರ್ಘಕಾಲ ಮುಂದುವರೆದರೆ ಅನಾರೋಗ್ಯ ಉಂಟಾಗುತ್ತದೆ*ಅಮೃತದ ಮಳೆ ನಮ್ಮೊಳಗೆ ಉಂಟಾಗುವುದು ಯಾವಾಗ?*ಸೂತ್ರದೊಳಗೊಳಪಟ್ಟ ಬದುಕ ನೀ ನಡೆಸುತಿರೆ ಹರಡಿ ಮೈಯೊಳು ಬಿಸಿಯ ಜ್ವಲಿಸೆ ಕಾಯಾಗ್ನಿ ಕೋಟಿ ಜನ್ಮದ ಗಾಢನಿದ್ದೆಯನು ತೊರೆದೆದ್ದು ಸಾಗುವಳು ಪರಮಪದದೆಡೆಗೆ ಕುಂಡಲಿನಿ-ಶ್ರೀಕಾವ್ಯ*ಪ್ರಾಣಾಪಾನಗಳ ಐಕ್ಯ ಎಂದರೇನು?! *ಅಮೃತಪಾನ ಮಾಡಿ ನಾವೂ ಅಮೃತರಾಗಬಹುದು; ಅದು ಜೀವನದ ಪರಮ, ಚರಮ ಲಕ್ಷ್ಯ24-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
378
ಅಮೃತವೇ ಆಹಾರವಾದಾಗ - ಅನ್ನಂ ಬ್ರಹ್ಮ 26 | When Amrita (nectar) itself becomes food - Annam Brahma 26
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಸಿವೆಂಬುದು ಒಂದು ಸಣ್ಣ ಅಭಿವ್ಯಕ್ತಿ ಅದರ ಹಿಂದೆ ಮಹಾಶಕ್ತಿ ಇದೆ, ಅದೇ "ಅಗ್ನಿ"*ಚರಾಚರ ಸೃಷ್ಟಿಯಲ್ಲಿ ಅತ್ಯಂತ ರುಚಿಕರವಾದ ಪದಾರ್ಥವೇ "ಅಮೃತ"*ತಮ್ಮೊಳಗೇ ಅಮೃತ ಪಾನವನ್ನು ಮಾಡುವವರು "ಯೋಗಿಗಳು"*ನಮ್ಮ ದೇಹದಲ್ಲಿ ಸೂರ್ಯ ಮಂಡಲ ಹಾಗೂ ಚಂದ್ರ ಮಂಡಲ ಎರಡೂ ಇದೆ, ಅವುಗಳ ಸ್ಥಾನ ಯಾವುದು?*ಸಾವು, ಮುಪ್ಪು, ರೋಗ, ವಿಷಬಾಧೆ, ಹಸಿವು, ಬಾಯಾರಿಕೆ ಉಂಟಾಗಲು ಕಾರಣವೇನು? ಇವುಗಳನ್ನು ಗೆಲ್ಲಲು ಸಾಧ್ಯವೇ?!*ನಮ್ಮೊಳಗೆ ಕ್ಷಣ ಕ್ಷಣಕ್ಕೂ ಸುಟ್ಟು ಹೋಗುತ್ತಿರುವ ಅಮೃತದ್ರವವನ್ನು ಉಳಿಸಿಕೊಂಡರೆ ಅಮರರಾಗಬಹುದು ಎಂದು ಯೋಗಶಾಸ್ತ್ರ ತಿಳಿಸಿದೆ*ಕಠಿಣ ಸಾಧನೆಯಿಂದ ಮೂಲಾಗ್ನಿ ಭುಗಿಲೆದ್ದುವ್ಯಾಪಿಸಿರೆ ವಿಸ್ತರಿಸಿ ತನುವಿನೊಳು ಬಿಸಿಯತಾಲುಮೂಲದೊಳಿರುವ ಚಂದ್ರಮಂಡಲ ಕರಗಿಸುಧೆಯಾಗಿ ಸುರಿವಾಗ ಸವಿದವನು ಧನ್ಯ-ಶ್ರೀಕಾವ್ಯ23-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
377
ಅಗ್ನಿಯನ್ನು ಆಳಿದವಳು - ಅನ್ನಂ ಬ್ರಹ್ಮ 25 | She who ruled Agni - Annam Brahma 25
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಂಜಲಾದ ಆಹಾರ ಪದಾರ್ಥ ಸೇವನೆಗೆ ಯೋಗ್ಯವಲ್ಲ ಎಂಬ ನಿಯಮ ದಂಪತಿಗಳಿಗೂ ಅನ್ವಯಿಸುತ್ತದೆಯೇ?!*ದೇಹದಲ್ಲಿ "ಆತ್ಮ" ರಾಜ; ಮನಸ್ಸು, ಪ್ರಾಣ, ಇಂದ್ರಿಯಗಳು ಆತ್ಮದ ಅಧೀನದಲ್ಲಿ ಇರುವಂತಹದ್ದು*ಸೀತೆ ಅಗ್ನಿಯನ್ನು ಆಳಿದವಳು! ರಾಮಾಯಣದಲ್ಲಿ ಇದರ ನಿರೂಪಣೆ ಹೇಗಿದೆ?*ಅಡುಗೆ ಮಾಡುವಾಗ, ಬಡಿಸುವಾಗ ಸೌಟನ್ನು ಪ್ರದಕ್ಷಿಣೆ ಗತಿಯಲ್ಲಿ ತಿರುಗಿಸಬೇಕು, ಏಕೆ?;*ಸೀತೆಗೆ ಅಗ್ನಿ ಶುದ್ಧಿ ಹಾಗೂ ಅಗ್ನಿ ಸಿದ್ಧಿ ಇತ್ತು!ಅಗ್ನಿ ಸಾಧನೆ ಕೇವಲ ಪುರುಷರಿಗೆ ಮಾತ್ರವಲ್ಲ ಸ್ತ್ರೀಯರಿಗೂ ಸಾಧ್ಯ!*ಜ್ವರ ಬಂದಾಗ ಅಥವಾ ಚಿಂತೆ, ದುಃಖವಾದಾಗ ಹಸಿವಾಗುವುದಿಲ್ಲ ಏಕೆ?!*ಸರಿಯಾಗಿ ಊಟಮಾಡುವುದು ಹಾಗೂ ಸಕ್ರಮ ಉಪವಾಸದಿಂದ ಅಗ್ನಿಯನ್ನು ಒಲಿಸಬಹುದು *ಗುರುವೇ ಅಗ್ನಿ ~ ಅಗ್ನಿಯೇ ಗುರು!*ಅಗ್ನಿ ಪರಿಚರ್ಯೆಯನ್ನು ಒಳಗಿನಿಂದ ಹಾಗೂ ಹೊರಗಿನಿಂದ ಸರಿಯಾಗಿ ಮಾಡಬೇಕು22-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
376
ಅಗ್ನಿಯನ್ನು ಆಳಿದವನು - ಅನ್ನಂ ಬ್ರಹ್ಮ 24 | He who ruled Agni - Annam Brahma 24
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹೆಚ್ಚಾದ ಅನ್ನವನ್ನು ಎಲೆಯಲ್ಲಿ ಬಿಟ್ಟರೆ ವ್ಯರ್ಥ, ಸೇವಿಸಿದರೆ ಅನರ್ಥ! ಇದಕ್ಕೆ ಪರಿಹಾರವೇನು?*ನಿದ್ದೆ, ತೂಕಡಿಕೆ, ಮೂರ್ಛೆ, ಹುಚ್ಚು - ಇವುಗಳು ಏರ್ಪಡುವುದು ವಾತ, ಪಿತ್ತ, ಕಫಗಳ ಆಟಗಳಿಂದ!*ತಿಂದ ತಕ್ಷಣ ಸಾಯುವಂತೆ ಮಾಡುವುದು ಮಾತ್ರ ವಿಷವಲ್ಲ, ನಮ್ಮ ದೇಹಕ್ಕೆ ಯಾವುದನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲವೋ ಅದೂ ವಿಷವೇ!*ನಳ ಚಕ್ರವರ್ತಿಯು ಪಂಚಭೂತಗಳನ್ನು ಗೆದ್ದಿದ್ದನು! ನಳ ದಮಯಂತಿಯ ಕಥೆಯಲ್ಲಿ ಅದರ ನಿರೂಪಣೆ ಹೇಗಿದೆ?*ಪ್ರಕೃತಿಗೆ ಅನುಗುಣವಾಗಿ ಸರಿಯಾಗಿ ಊಟ ಮಾಡಿದರೆ ಅಥವಾ ಕ್ರಮಬದ್ಧವಾಗಿ ಉಪವಾಸ ಮಾಡಿದರೆ ಸಾಮಾನ್ಯ ಮನುಷ್ಯರಿಗೂ ಅಗ್ನಿಯನ್ನು ಗೆಲ್ಲಲು ಸಾಧ್ಯವಿದೆ!*ನಳ ಚಕ್ರವರ್ತಿಯ ನೆನಪೇ "ಕಲಿ"ಯನ್ನು ದೂರಮಾಡುತ್ತದೆ!*ಅಗ್ನಿಯನ್ನು ಒಲಿಸಿಕೊಳ್ಳುವುದೇ ಜೀವನದ ಗುರಿ!21-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
375
ಪಾಕ ಮಧುರ; ನಿದ್ರೆ ಮಧುರ | The Sweet Connection Between What You Eat & How You Sleep - Annam Brahma 23
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಊಟವನ್ನು ಸಿಹಿಯಿಂದ ಪ್ರಾರಂಭ ಮಾಡಬೇಕು ಏಕೆ?*ಊಟದ ಮಧ್ಯದಲ್ಲಿ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕುಡಿಯಬೇಕು*ಆಹಾರ ಎಂಜಲಾದರೆ ಅದು ತಾಮಸವಾಗುತ್ತದೆ!*ಸ್ವೀಕರಿಸಿದ ಆಹಾರ ಧಾತುಗಳಾಗಿ ಪರಿಣಾಮವಾಗಲು ಆರು ಸಂಗತಿಗಳು ಕಾರಣ: ಊಷ್ಮ(ಅಗ್ನಿ), ವಾಯು, ಕ್ಲೇದ(ದ್ರವ), ಸ್ನೇಹ(ಜಿಡ್ಡು), ಕಾಲ ಮತ್ತು ಸಮಯೋಗ(ಸಮನ್ವಯತೆ)*ಆಹಾರ ಹೊಟ್ಟೆಯೊಳಗೆ ಹೋದಮೇಲೆ ಅದು ಮೂರು ಹಂತದಲ್ಲಿ ಜೀರ್ಣವಾಗುತ್ತದೆ*ರಾತ್ರಿ ಸೇವಿಸಿದ ಆಹಾರ ಮಧುರ ಪಾಕಾವಸ್ಥೆಯಲ್ಲಿ ಇದ್ದಾಗಲೇ ನಿದ್ದೆ ಮಾಡಬೇಕು, ಕಫದ ಕಾಲದಲ್ಲಿಯೇ ನಿದ್ದೆ ಮಾಡಿದಾಗ ಗಾಢನಿದ್ದೆ ಬರುತ್ತದೆ*ನಳ ಚಕ್ರವರ್ತಿಯು ಅಗ್ನಿಯನ್ನು ಗೆದ್ದಿದ್ದನು! ನಳ ದಮಯಂತಿಯ ಕಥೆಯಲ್ಲಿ ಇದರ ಸಂಕ್ಷಿಪ್ತ ನಿರೂಪಣೆ ಹೇಗಿದೆ?20-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
374
ಹೊಟ್ಟೆಯೊಳಗೊಂದು ಅಡುಗೆಮನೆ - ಅನ್ನಂ ಬ್ರಹ್ಮ 22 | A Kitchen Inside the Belly - Annam Brahma 22
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮ ದೇಹದಲ್ಲಿ ಜಠರಾಗ್ನಿಯೇ ಎಲ್ಲಾ ಅಗ್ನಿಗಳಿಗೂ ಅಧಿಪತಿ*ಪಾಚಕಾಗ್ನಿಯಿಂದ ಆಯುಸ್ಸು ಉಳಿಯುತ್ತದೆ ಮತ್ತು ಶಕ್ತಿ ಹೆಚ್ಚುತ್ತದೆ*ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಾಣವಾಯು, ಸಮಾನವಾಯುಗಳ ಪಾತ್ರವೇನು??*ಚೆನ್ನಾಗಿ ಅಗಿದು ತಿನ್ನದಿದ್ದರೆ ಜಠರಾಗ್ನಿಯ ಮೇಲೆ ಒತ್ತಡ ಜಾಸ್ತಿಯಾಗುತ್ತದೆ*ಪಾತ್ರೆಯಲ್ಲಿ ಅಕ್ಕಿಯನ್ನು ಬೆಂಕಿಯು ಹೇಗೆ ಬೇಯಿಸಿ ಅನ್ನವನ್ನಾಗಿಸುತ್ತದೆಯೋ ಹಾಗೆಯೇ ಹೊಟ್ಟೆಯಲ್ಲಿ ಅಗ್ನಿಯು ನಾವು ತಿಂದ ಆಹಾರವನ್ನು ಜೀರ್ಣ ಮಾಡುತ್ತದೆ!*ನಾವು ಸ್ವೀಕರಿಸಿದ ಆಹಾರದಲ್ಲಿ ಸಾರವನ್ನು ಬಿಟ್ಟು ಉಳಿದ ಬೇಡದ ಪದಾರ್ಥವನ್ನು ಹೊರಗೆ ಹಾಕುವುದು ಅಪಾನ ವಾಯು*ಮಹಾಪ್ರಾಣ ಅಕ್ಷರಗಳ ಸರಿಯಾದ ಉಚ್ಚಾರಣೆಯಿಂದ ಅಗ್ನಿ ಜಾಗೃತಿ!*ಮಾತು, ಸಂಗೀತ ಯಾವ ವಾಯುವಿನಿಂದ ಸಾಧ್ಯವಾಗುತ್ತದೆ??*ಎಂಜಲಾದ ಆಹಾರ ಪದಾರ್ಥ ಸೇವನೆಗೆ ಯೋಗ್ಯವಲ್ಲ ಯಾಕೆ?*ಊಟ ಮತ್ತು ಉಸಿರಾಟಕ್ಕೆ ಅವಿನಾಭಾವ ಸಂಬಂಧವಿದೆ!19-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
373
ಅಗ್ನಿ ಇಲ್ಲದುದೆಲ್ಲಿ… ನಮ್ಮಲ್ಲಿ? - ಅನ್ನಂ ಬ್ರಹ್ಮ 21 | Where isn't Agni present in us? - Annam Brahma 21
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮೊಳಗಿನ ಪಂಚಾಗ್ನಿಯನ್ನು ಚೆನ್ನಾಗಿಟ್ಟುಕೊಂಡರೆ ನಮ್ಮ ಬದುಕೇ ಪಂಚಾಗ್ನಿ ತಪಸ್ಸಾಗಬಹುದು!*ನಮ್ಮ ದೇಹದಲ್ಲಿ ಎಲ್ಲೆಡೆಯೂ ಅಗ್ನಿ ಇದೆ*ಆಧುನಿಕ ವಿಜ್ಞಾನ ಮತ್ತು ಸನಾತನ ಧರ್ಮ ಶಾಸ್ತ್ರಗಳು ನಮ್ಮ ದೇಹವು ಯಾವುದರಿಂದ ಕೂಡಿದೆ ಎಂದು ಹೇಗೆ ವರ್ಣಿಸಿವೆ?? *ನಮ್ಮ ದೇಹದ ಸಪ್ತಧಾತುಗಳ ಕೆಲಸಗಳೇನು?*ದೇವಿಯ ವಿವಿಧ ರೂಪಗಳು ಮತ್ತು ನಮ್ಮ ದೇಹದ ಸಪ್ತಧಾತುಗಳ ಸಂಬಂಧವನ್ನು ಲಲಿತಾಸಹಸ್ರನಾಮದಲ್ಲಿ ನಿರೂಪಿಸಲಾಗಿದೆ*ಜ್ಯೌತಿಷದ ಪ್ರಕಾರ ಗ್ರಹಗಳಿಗೂ ಮತ್ತು ಸಪ್ತಧಾತುಗಳಿಗೂ ಏನು ಸಂಬಂಧ?*ಪಂಚಭೂತಗಳು ನಮ್ಮ ದೇಹದೊಳಗೆ ಸಪ್ತಧಾತುಗಳಾಗಿ ಪರಿವರ್ತನೆಯಾಗುವುದಕ್ಕೆ ಕಾರಣ "ಅಗ್ನಿ"*ಗಂಗೆಯಲ್ಲಿ ಅಸ್ಥಿಯನ್ನು ಏಕೆ ಹಾಕಬೇಕು? ಅದರಿಂದ ಜೀವಕ್ಕಾಗುವ ಉಪಯೋಗವೇನು??*ಧಾತುಸಾಮ್ಯವನ್ನು ಏರ್ಪಡಿಸುವುದೇ "ಚಿಕಿತ್ಸೆ"! ಧಾತುಗಳು ಒಂದಕ್ಕೊಂದು ಪೂರಕವಾಗಿಲ್ಲದಿದ್ದರೆ ಬದುಕೇ ಇಲ್ಲ!*ಉಗುರು, ಕೂದಲನ್ನು ಕತ್ತರಿಸಿದರೆ ನಮಗೆ ನೋವಾಗುವುದಿಲ್ಲ ಏಕೆ?18-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
372
ಅಗ್ನಿಯ ಅವತಾರಗಳು - ಅನ್ನಂ ಬ್ರಹ್ಮ 20 | The Many Forms of Agni - Annam Brahma 20
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮೊಳಗೆ ಅಗ್ನಿಯ ಐದು ಅವತಾರಗಳು - ಪಾಚಕ, ರಂಜಕ, ಸಾಧಕ, ಆಲೋಚಕ ಮತ್ತು ಭ್ರಾಜಕ; ಅವುಗಳ ಸ್ಥಾನಗಳು ಯಾವುವು?*ಪಾಚಕ ಅಗ್ನಿಯೇ ಬೇರೆಲ್ಲಾ ಅಗ್ನಿಗಳಿಗೆ ಶಕ್ತಿ ಕೊಡುವಂತಹದ್ದು!*ರಕ್ತವು ಕೆಂಪಾಗಿರುವುದಕ್ಕೆ ಮತ್ತು ಮನಸ್ಸಿನಲ್ಲಿ ರಾಗ, ಪ್ರೀತಿ, ಭಾವಗಳ ಉತ್ಪತ್ತಿಗೆ ರಂಜಕ ಅಗ್ನಿಯೇ ಕಾರಣ! *ಇಹ-ಪರ ಎರಡರ ಸಾಧನೆಗೂ ಸಾಧಕಾಗ್ನಿಯೇ ಕಾರಣ, ಸಾಧಕಾಗ್ನಿಯ ಪರಮ ಲಕ್ಷ್ಯವೇ ಮೋಕ್ಷದ ಸಾಧನೆ! *ಚರ್ಮದ ಮೇಲೆ ಯಾವುದೇ ಲೇಪನ ಹಾಕಿದರೆ ಅದನ್ನು ನಮ್ಮ ದೇಹ ಹೀರುವುದು*ನಮ್ಮ ಚರ್ಮದ ಕಾಂತಿ, ಸೌಂದರ್ಯ, ಛಾಯೆ, ತೇಜಸ್ಸು - ಭ್ರಾಜಕಾಗ್ನಿಯ ಕಾರಣದಿಂದ!*ಅಗ್ನಿ ಮಾತ್ರದಿಂದಲೇ ಬಯಸಿದ್ದನ್ನು ಪಡೆಯಬಹುದು;ಅಸಾಧ್ಯವಾದುದನ್ನು ಸಾಧಿಸಬಹುದು; ಹಾಗಾಗಿ ನಾವು ಅಗ್ನಿಯ ಉಪಾಸನೆಯನ್ನು ಮಾಡೋಣ, ಅಗ್ನಿಯನ್ನು ಅರಿಯುವ ಪ್ರಯತ್ನ ಮಾಡೋಣ!17-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
371
ಅಗ್ನಿಯ ಅವಸ್ಥೆಗಳು ಮತ್ತು ನಮ್ಮ ದುರವಸ್ಥೆಗಳು | The States of Agni and Our Miseries - Annam Brahma 19
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಣ ಕಡಿಮೆಯಾದರೆ ಹಾಹಾಕಾರ! ಹೆಚ್ಚಾದರೆ ಅಹಂಕಾರ! ಎರಡೂ ಸಮಸ್ಯೆಯೇ, ಹಾಗಾಗಿ ಹಣವೂ ಕೂಡ ಸಮಪ್ರಮಾಣದಲ್ಲಿರಬೇಕು;ಜೀವನದಲ್ಲಿ ಎಲ್ಲವೂ ಸಮಪ್ರಮಾಣದಲ್ಲಿರಬೇಕು*ಅಗ್ನಿಯ ನಾಲ್ಕು ಅವಸ್ಥೆಗಳು - ಮಂದ, ತೀಕ್ಷ್ಣ, ವಿಷಮ ಮತ್ತು ಸಮ*ಜೀವನದಲ್ಲಿ ಆತ್ಮಾವಲೋಕನ ಹೇಗೆ ಮುಖ್ಯವೋ ಹಾಗೆಯೇ ನಮ್ಮೊಳಗಿನ ಅಗ್ನಿಯ ಅವಲೋಕನವೂ ಕೂಡ ಮುಖ್ಯ!*ಬೆಳಿಗ್ಗೆ ಏಳುವಾಗ ರಾತ್ರಿ ಊಟವು ಪೂರ್ಣವಾಗಿ ಜೀರ್ಣವಾಗಿರಬೇಕು, ಆಗ ಕುಶಲನಾಗಿರಲು ಸಾಧ್ಯ*ರಾತ್ರಿಭೋಜನ ಪೂರ್ಣ ಜೀರ್ಣವಾಗಿರಬೇಕು ಸುಪ್ರಭಾತಕೆ ಮುನ್ನ ದೇಹ ಕುಶಲವಿರೆನಿರ್ಮಲೋದರನಾಗಿ ನವದಿನಕೆ ಮುನ್ನಡೆಯೊಹೊಸದಿನದ ಸಂಭ್ರಮಕೆ ಬೇಕೆ ಹಳೆಮುಸುರೆ? -ಶ್ರೀಕಾವ್ಯ*ಅಗ್ನಿಯು ಸಮವಾಗಿದ್ದರೆ ಮಾತ್ರ ದೇಹ, ಇಂದ್ರಿಯಗಳು, ಮನಸ್ಸು, ಆತ್ಮ ಎಲ್ಲವೂ ಪ್ರಸನ್ನವಾಗಿರುತ್ತದೆ; ಇಲ್ಲದಿದ್ದರೆ ಯಾವುದೂ ಸರಿ ಇರುವುದಿಲ್ಲ!*ಅಗ್ನಿಯ ನಾಲ್ಕು ಅವಸ್ಥೆಯ ಗುಣಗಳು;ದೇಹದ ಮೇಲೆ ಅಗ್ನಿ ಅವಸ್ಥೆಯ ಪರಿಣಾಮಗಳು, ಪರಿಹಾರಗಳು; ಯಾವುವು?*ಪಾಶ್ಚಿಮಾತ್ಯ ವೈದ್ಯ ಪದ್ಧತಿಗಳು ರೋಗ ಬಂದರೆ ಏನು ಮಾಡಬೇಕೆಂದು ಹೇಳಿದರೆ, ಆಯುರ್ವೇದವು ರೋಗ ಬಾರದಂತೆ ಹೇಗಿರಬೇಕು ಎಂದು ಹೇಳುತ್ತದೆ!*ಆರೋಗ್ಯ ಮತ್ತು ಅಧ್ಯಾತ್ಮ - ಈ ಎರಡರ ಸಾಧನೆಯು ಒಂದೇ!16-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
370
ನಮ್ಮೊಳಗಿನ ಅಗ್ನಿರಾಜ್ಯ - ಅನ್ನಂ ಬ್ರಹ್ಮ 18 | The Kingdom of Fire Within Us - Annam Brahma 18
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಯಾರು ತನ್ನ ದೇಶ, ನಮ್ಮ ಪರಂಪರೆಯ ಸಿದ್ಧಾಂತಕ್ಕೆ ಮಹತ್ವವನ್ನು ಕೊಡುತ್ತಾನೋ ಅವನೇ "ಸ್ವತಂತ್ರ"*ದೇಹದಲ್ಲಿ ವಿಷ್ಣುವಿನ ಸ್ಥಾನ ಅನಾಹತ ಚಕ್ರದಲ್ಲಿದೆ; ಅಲ್ಲಿಯೇ "ಓಜಸ್" ಎಂಬ ಅಮೃತವೂ ಇದೆ*ನಮ್ಮ ಭಾವನೆಗಳಿಂದ ಅಗ್ನಿಯ ಶಕ್ತಿಯನ್ನು ಹೆಚ್ಚಿಸಬಹುದು!*ನಮ್ಮ ದೇಹದಲ್ಲಿರುವ ಪಂಚಭೂತಗಳ ಸ್ಥಾನಗಳನ್ನು ಸೌಂದರ್ಯ ಲಹರಿಯಲ್ಲಿ ಹೇಗೆ ವರ್ಣಿಸಿದ್ದಾರೆ?*ಪಂಚಭೂತಗಳ ಗುಣಗಳು ಯಾವುವು?*ನಮ್ಮೊಳಗೆ ಅಗ್ನಿಯು ಹೃದಯದಲ್ಲಿ ಬೆಳಕಾಗಿ ಮತ್ತು ನಾಭಿಯಲ್ಲಿ ಜಠರಾಗ್ನಿಯಾಗಿ ನಮ್ಮನ್ನು ಪಾಲಿಸುತ್ತಿದ್ದಾನೆ*ನಮ್ಮ ಇಡೀ ದೇಹವು ಪವಿತ್ರವೇ ಆದರೂ ನಾಭಿಯ ಮೇಲ್ಭಾಗ ಹೆಚ್ಚು ಪವಿತ್ರ*ವಾತ ಹೆಚ್ಚಾದರೆ ನೋವು; ಪಿತ್ತ ಹೆಚ್ಚಾದರೆ ಉರಿ ಮತ್ತು ಕಫ ಹೆಚ್ಚಾದರೆ ತುರಿಕೆ ಉಂಟಾಗಬಹುದು*ಎಡಮಗ್ಗಲಲ್ಲಿ ಮಲಗಬೇಕು, ಬಲಮಗ್ಗಲಲ್ಲಿ ಏಳಬೇಕು.. ಏಕೆ?!*ತುಪ್ಪವನ್ನು ಮುಟ್ಟಿ ನಾಭಿಯ ಸುತ್ತ ನಲವತ್ತೆಂಟು ಬಾರಿ ಸವರುವುದರಿಂದ ಅಜೀರ್ಣವು ಶಮನಗೊಳ್ಳುತ್ತದೆ!15-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
369
ಪಿತ್ತವೋ? ಅಗ್ನಿಯೋ? ರುದ್ರನೋ? - ಅನ್ನಂ ಬ್ರಹ್ಮ 17 | The Science of Food Energy - Annam Brahma 17
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಸಿವು ಎಂಬ ಶಕ್ತಿ ಸಾಕ್ಷಾತ್ ಪರಮಾತ್ಮನೇ ಆಗಿದ್ದಾನೆ*ಅನ್ನವನ್ನು ಕೀಳಾಗಿ ಕಂಡು ಅಥವಾ ಕೋಪಗೊಂಡು ಊಟ ಮಾಡಿದರೆ ಅದು ದೇವತೆಗಳಿಗೆ ಸಮರ್ಪಣೆ ಆಗುವುದಿಲ್ಲ, ಬದಲಾಗಿ ರಾಕ್ಷಸರಿಗೆ ಸಲ್ಲುತ್ತದೆ*ಕೋಪ, ಅಸೂಯೆ, ಭಯ, ಲೋಭ, ಶೋಕ, ದೈನ್ಯ ಅಥವಾ ಯಾರಮೇಲಾದರರೂ ದ್ವೇಷ ಮಾಡುತ್ತಾ ಊಟ ಮಾಡಿದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ*ನಿಂತುಕೊಂಡು ಆಹಾರ ಅಥವಾ ಪಾನೀಯ ಸ್ವೀಕಾರ ಮಾಡಬಾರದು, ಏಕೆ?!*ಭಾರತೀಯರ ಕುಳಿತು ಊಟ ಮಾಡುವ ಭಂಗಿಯು "ಸತ್ವಗುಣ"ವನ್ನು ಹೆಚ್ಚಿಸುತ್ತದೆ*ಪಿತ್ತವೆಂಬುದು ದೋಷವೇ?!*ಅಗ್ನಿ ಹಾಗೂ ಪಿತ್ತ ಎರಡರಲ್ಲಿ ವತ್ಯಾಸವೇನು? *ನಮ್ಮ ಈ ಶರೀರ ತ್ರಿಮೂರ್ತಿಮಯವಾಗಿದೆ, ಶರೀರದೊಳಗೆ ಇರುವ ವಾತ ~ ಬ್ರಹ್ಮ; ಪಿತ್ತ ~ ರುದ್ರ; ಕಫ ~ ವಿಷ್ಣು*ವಾತ, ಪಿತ್ತ, ಕಫ - ತ್ರಿಮೂರ್ತಿಗಳು ಎಂದು "ನಾಡೀ ಜ್ಞಾನ ತರಂಗ" ಹಾಗೂ "ಯೋಗರತ್ನಾಕರ" ಎಂಬ ಗ್ರಂಥಗಳಲ್ಲಿ ಉಲ್ಲೇಖಮಾಡಿದ್ದಾರೆ*ಯಾವ ಅಕ್ಕಿ ಊಟಕ್ಕೆ ಶ್ರೇಷ್ಠ?14-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
368
ಅಗ್ನಿ ದೇವರೇ? - ಅನ್ನಂ ಬ್ರಹ್ಮ 16 | Is Agni a God? - Annam Brahma 16
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾಹನದಲ್ಲಿ ಇಂಧನ, ಅಗ್ನಿ ಮತ್ತು ವಾಯು ಹೇಗೆ ಒಟ್ಟಿಗೆ ಸೇರಿ ಕೆಲಸ ಮಾಡುತ್ತದೆಯೋ ಹಾಗೆ ನಮ್ಮ ದೇಹವನ್ನು ವಾತ, ಪಿತ್ತ ಮತ್ತು ಕಫಗಳು ನಡೆಸುತ್ತವೆ*ದೇಹ ಬಿಸಿ ಇರುವುದು ನಮ್ಮೊಳಗೆ ಅಗ್ನಿ ಇರುವುದಕ್ಕೆ ಸಾಕ್ಷಿ! *ಮಹಾನಾರಾಯಣೋಪನಿಷತ್ತಿನ, ನಾರಾಯಣ ಸೂಕ್ತದಲ್ಲಿ ನಮ್ಮ ದೇಹದ ಅಗ್ನಿಯನ್ನು "ಸಾಕ್ಷಾತ್ ಪರಮಾತ್ಮ" ಎಂದು ನಿರೂಪಣೆ ಮಾಡಲಾಗಿದೆ*ನಾವು ಸೇವಿಸುವ ಆಹಾರವನ್ನು ಮೊದಲು ಸ್ವೀಕರಿಸುವುದು ನಮ್ಮೊಳಗಿನ ಅಗ್ನಿ*ದೇವರ ಕೋಣೆಯಲ್ಲಿ ವ್ಯವಸ್ಥೆ ಸರಿಯಿಲ್ಲದಿದ್ದರೆ ದೇವರ ಉಪಸ್ಥಿತಿ ಇಲ್ಲದಿರಬಹುದು, ಆದರೆ ಪ್ರತಿಯೊಂದು ಜೀವಿಯೊಳಗೆ ಅಗ್ನಿಯ ರೂಪದಲ್ಲಿ ದೇವರು ಖಂಡಿತವಾಗಿ ನೆಲೆಸಿದ್ದಾನೆ!*ನಮ್ಮ ದೇಹದಲ್ಲಿ ಪಿತ್ತದ ಹೊರತಾಗಿ ಬೇರೆ ಅಗ್ನಿ ಇರುವುದೇ?13-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
367
ಏನಿದು ಒಡಲೊಳಗಿನ ಅಗ್ನಿ? - ಅನ್ನಂ ಬ್ರಹ್ಮ 15 | What is this digestive fire? - Annam Brahma 15
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾಹನಕ್ಕೆ ಇಂಧನ ಹೇಗೋ, ಹಾಗೆಯೇ ದೇಹಕ್ಕೆ ಆಹಾರ*ದೇಹದಲ್ಲಿರುವ ಮನಸ್ಸು ಮತ್ತು ಅಗ್ನಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ!*ಮೊದಲು ಸರಿ-ತಪ್ಪುಗಳನ್ನು ತಿಳಿದುಕೊಂಡು ಅನಂತರ ಎಷ್ಟು ಸಾಧ್ಯವೋ, ಏನು ಸಾಧ್ಯವೋ ಅದನ್ನು ಪಾಲನೆ ಮಾಡಬೇಕು*ಆಹಾರ ವ್ಯತ್ಯಾಸವಾದರೆ ಮುಕ್ತಿಮಾರ್ಗದಿಂದ ಭ್ರಷ್ಟರಾಗುತ್ತಾರೆ*ದೇಹದಲ್ಲಿರುವ ಅಗ್ನಿಯು ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ*ನಮ್ಮ ಅಸ್ತಿತ್ವಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಜಠರಾಗ್ನಿಗೂ ಇದೆ*ನಾವು ವಾಹನಕ್ಕೆ ಇಂಧನ ತುಂಬಿಸುವಾಗ ಎಷ್ಟು ಜಾಗ್ರತೆವಹಿಸುತ್ತೇವೆಯೋ, ನಮ್ಮ ದೇಹಕ್ಕೆ ಆಹಾರವೆಂಬ ಇಂಧನವನ್ನು ಹಾಕುವಾಗ ಏಕೆ ಸ್ವಲ್ಪವೂ ಜಾಗ್ರತೆವಹಿಸುವುದಿಲ್ಲ!?*ದೇಹವೆಂಬ ವಾಹನ ಕೆಟ್ಟರೆ ಇನ್ನೊಂದು ಹೊಸತು ಸಿಗಲಾರದು!12-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
366
ಲಂಘನಂ ಪರಮೌಷಧಮ್ - ಅನ್ನಂ ಬ್ರಹ್ಮ 14 | लंघनं परमौषधम् - Annam Brahma 14
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಊಟಕ್ಕಿಂತ ಮೊದಲು ಹಸಿಶುಂಠಿ ಮತ್ತು ಸೈಂಧವ ಲವಣವನ್ನು ಸ್ವೀಕರಿಸಿದರೆ ಏನೆಲ್ಲಾ ಪ್ರಯೋಜನಗಳು?!*ಬಾರ್ಲಿ - ತಿನ್ನುವಾಗ ಸ್ವಲ್ಪ ಮಧುರವಾಗಿದ್ದರೂ ಹೊಟ್ಟೆಗೆ ಹೋದಮೇಲೆ ಕಟು!*ಕನಿಷ್ಠ ಒಂದೊಳ್ಳೆಯ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು*ಪರಮಾತ್ಮನಲ್ಲಿ ಮೈಮರೆತು, ಹಸಿವನ್ನು ಮರೆತರೆ ಅದು ನಿಜವಾದ ಹಾಗೂ ಸಹಜವಾದ ಉಪವಾಸವಾಗುವುದು!*ಉಪವಾಸವನ್ನು ಸರಿಯಾಗಿ ಮಾಡಿದರೆ ಅದು ಬಲವೃದ್ಧಿ ಮಾಡುತ್ತದೆ*ದೇಹದ ಎಷ್ಟೋ ಏರುಪೇರುಗಳು ಊಟದಿಂದ ಸರಿಯಾಗುತ್ತವೆ; ಮತ್ತು ಕೆಲವನ್ನು ಉಪವಾಸದಿಂದ ಸರಿ ಮಾಡಿಕೊಳ್ಳಲು ಸಾಧ್ಯವಿದೆ*ಯಾರೆಲ್ಲಾ ಉಪವಾಸ ಮಾಡಬಾರದು?*ಊಟದಿಂದಲೂ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಬಹುದು; ಉಪವಾಸದಿಂದಲೂ ಕೂಡಾ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಬಹುದು*ಉಪವಾಸ ಕೆಟ್ಟರೆ ಏನೆಲ್ಲಾ ಅನಾಹುತಗಳು ಆಗಬಹುದು?*ಊಟವಾಗಲಿ, ಉಪವಾಸವಾಗಲಿ ಜ್ಞಾನ ಪೂರ್ವಕವಾಗಿ ತಿಳಿದುಕೊಂಡು ಮಾಡಬೇಕೇ ಹೊರತು ತಿಳಿಯದೇ ಮಾಡಬಾರದು11-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
365
ಅಗ್ನಿಯೊಡನೆ ಮಾತುಕಥೆ - ಅನ್ನಂ ಬ್ರಹ್ಮ 13 | Dialogue with Internal Fire - Annam Brahma 13
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಾವು ಮೃತರಾದ ಅನಂತರ ನಮ್ಮ ಧಾತುವಿನಲ್ಲಿ ಸೇರಿಕೊಂಡ ಪಾಪವು ನಮ್ಮೊಂದಿಗೆ ಬರುವುದೇ?; ಬರುವುದಿಲ್ಲವೇ?*ಹಸಿವಾಗದಂತೆ ಉಪವಾಸ ಹೇಗೆ ಮಾಡುವುದು?*ಜಠರಾಗ್ನಿಯನ್ನು, ಪ್ರಾಣವನ್ನು ಸರಿಯಾಗಿಟ್ಟುಕೊಂಡರೆ ಅದು ನಾವು ಹೇಳಿದಂತೆ ಕೇಳುತ್ತದೆ*ಮನಸ್ಸು ಕೊರಗಿದಾಗ ಜಠರಾಗ್ನಿಯು ಸೊರಗುತ್ತದೆ!!*ಮನಸ್ಸಿನ ಮೂಲಕವಾಗಿ ಹಸಿವನ್ನು, ಉಪವಾಸವನ್ನು ನಿಯಂತ್ರಿಸಬಹುದು*ನಿರಾಹಾರದ ಉದ್ದೇಶವೇ "ತಮಸೋ ಮಾ ಜ್ಯೋತಿರ್ಗಮಯ"!*ಪೂಜೆ ಅಥವಾ ಅನುಷ್ಠಾನದ ಮೊದಲು ಆಹಾರ ಸೇವಿಸಬಾರದು.., ಏಕೆ?*ಉಪವಾಸವೆಂದರೆ ಶರೀರ ಶೋಷಣೆಯಲ್ಲ; ಉಪವಾಸವೆಂದರೆ ದುರ್ಗುಣಗಳನ್ನು ಬಿಡಬೇಕು; ಸದ್ಗುಣಗಳ ಸಹವಾಸ ಮಾಡಬೇಕು*"Brunch" - ಮಕ್ಕಳನ್ನು ಬಿಟ್ಟು ಎಲ್ಲರೂ ಪಾಲಿಸಬೇಕಾದ ನಿಯಮ*ಉಪವಾಸವನ್ನು ಮಾರ್ಗದರ್ಶನವಿಲ್ಲದೆ ಮಾಡಕೂಡದು!10-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
364
ಉಪವಾಸವೆಂಬ ಉತ್ಸವ - ಅನ್ನಂ ಬ್ರಹ್ಮ 12 | Fasting is a Festival - Annam Brahma 12
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ದೇವರ ನೈವೇದ್ಯಕ್ಕೆ ಸಮರ್ಪಿಸುವ ಆಹಾರದಲ್ಲಿ "ಸಾತ್ವಿಕತೆ" ಮುಖ್ಯ *ಊಟ ಮಾಡದೇ ಇರುವುದು, ಹಸಿವನ್ನು ಕಟ್ಟುವುದು ಉಪವಾಸವಲ್ಲ; ನ್ಯಾಯವಾದ "ಉಪವಾಸ" ಎಂದರೆ ಹಸಿವೇ ಆಗಬಾರದು*ವಾಲ್ಮೀಕಿ ಮಹರ್ಷಿಗಳು, ವಿಶ್ವಾಮಿತ್ರರು ಹಾಗೂ ರಮಣ ಮಹರ್ಷಿಗಳು, ಹಿರಣ್ಯಕಶಿಪು ಎಂತಹ ಉಪವಾಸವನ್ನು ಮಾಡಿದರು!? *ಉಪವಾಸದ ನೇರ ಫಲವೇನೆಂದರೆ 'ಅಗ್ನಿಪ್ರಜ್ವಲನ'; ತನ್ಮೂಲಕ ಸರ್ವದೋಷಗಳ ನಾಶ*ಏಕಾದಶಿಯಂದು ಉಪವಾಸ ಮಾಡುವುದೇಕೆ?*ಏಕಾದಶಿಯಂದು ಹರಿನಾಮ ಸ್ಮರಣೆಯಲ್ಲಿ ಮುಳುಗಬೇಕು*ಉಪವಾಸ ಮಾಡುವ ಸಮಯದಲ್ಲಿ ಊಟಮಾಡಿದರೆ ಮಾತ್ರ ವ್ರತ ಭಂಗವಲ್ಲ; ಹಸಿವೆಯಾದರೂ ವ್ರತ ಭಂಗ09-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
363
ಭೋಜನವು ತಪಸ್ಸಾಗಬಹುದು - ಅನ್ನಂ ಬ್ರಹ್ಮ 11 | Turn Daily Meals into Tapas! - Annam Brahma 11
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಭೋಜನವು ಇಂದ್ರಿಯಗಳು ಹಾಗೂ ಅಂತಃಕರಣದ ತೃಪ್ತಿಗೆ ಕಾರಣವಾಗಬೇಕು*ಊಟಮಾಡಿ ಉದ್ಧಾರವಾಗುವುದು ಹೇಗೆ?!; ಎಂಬುದನ್ನು ನಮ್ಮ ಭಾರತೀಯ ಸಂಸ್ಕೃತಿ ತಿಳಿಸುತ್ತದೆ*ಪಾಪವೇ ಎಲ್ಲಾ ಸಮಸ್ಯೆಗಳಿಗೂ ಮೂಲ*"ತಪಸ್ಸು" ಪಾಪ ಪರಿಹಾರದ ರಾಜ ಮಾರ್ಗ*ಕ್ರಮಬದ್ಧವಲ್ಲದ ಆಹಾರ ಸೇವನೆಯು ಕೂಡಾ ಪಾಪಕ್ಕೆ ಕಾರಣವಾಗಬಹುದು!!*ನಾವು ಸೇವಿಸುವ ಆಹಾರವು ಕಾಲಕ್ಕೆ; ಜೀರ್ಣಕ್ಕೆ; ಪ್ರಕೃತಿಗೆ ಹಿತವಾ?, ಎಂಬುದನ್ನು ತಿಳಿದುಕೊಳ್ಳಬೇಕು*ನಮ್ಮೊಳಗಿರುವ ಜಠರಾಗ್ನಿ ಪ್ರಜ್ವಲಿಸಲು ಅನ್ನ-ಪಾನಗಳೇ ಇಂಧನ; ಇದರಿಂದ ಶರೀರದಲ್ಲಿ ವ್ಯಾಪಿಸಿರುವ ದೋಷ-ರೋಗ-ಪಾಪಗಳು ನಾಶವಾಗುತ್ತದೆ*ಜಠರವೈಶ್ವಾನರನು ಪ್ರಜ್ವಲಿತನಾದಾಗಹುಲ್ಲುಮೆದೆಗಳ ಸುಡುವ ಕಾಡ್ಗಿಚ್ಚಿನಂತೆ ದೇಹಗತ ದೋಷಗಳ, ಜೀವಗತ ಪಾಪಗಳದಹಿಸುವನು ಲೇಶವೀ ಶೇಷವಿರದಂತೆಸೂತ್ರದೊಳಗೊಳಪಟ್ಟ ಬದುಕ ನೀ ನಡೆಸುತಿರೆ ಹರಡಿ ಮೈಯೊಳು ಬಿಸಿಯ ಜ್ವಲಿಸೆ ಕಾಯಾಗ್ನಿ ಕೋಟಿ ಜನ್ಮದ ಗಾಢನಿದ್ದೆಯನು ತೊರೆದೆದ್ದು ಸಾಗುವಳು ಪರಮಪದದೆಡೆಗೆ ಕುಂಡಲಿನಿ-ಶ್ರೀಕಾವ್ಯ08-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
362
ಭೋಜನವೊಂದು ಯಜ್ಞ - ಅನ್ನಂ ಬ್ರಹ್ಮ 10 | Every meal is a sacred offering - Annam Brahma 10
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅಡುಗೆ ಮನೆಯಲ್ಲಿ ಮಾಡುವುದು ಕೇವಲ ಸಿದ್ಧತೆ ಅಷ್ಟೇ; ಹೊಟ್ಟೆಯೊಳಗೆ ನಿಜವಾದ ಪಾಕವಾಗುತ್ತದೆ*ಕುಲಾಂತರಿ ಗೋಧಿಯಿಂದ ಆಪತ್ತು; ಗೋಧಿ ಮೂಲ ಸ್ವರೂಪವನ್ನು ಕಳೆದುಕೊಂಡಿದೆ*ಶರೀರವೇ ಯಾಗಶಾಲೆ; ಜಠರಾಗ್ನಿಯೇ ಯಜ್ಞದ ಅಗ್ನಿ; ನಾವೇನು ಊಟ ಮಾಡುತ್ತೇವೆಯೋ ಅದುವೇ ಹವಿಸ್ಸು; ಒಟ್ಟಾರೆಯಾಗಿ "ಭೋಜನವೇ ಯಜ್ಞ"!*ಹಗಲೊಮ್ಮೆ, ಸಂಜೆಯೊಮ್ಮೆ ಮಾತ್ರ ಊಟ ಮಾಡಬೇಕು; ಇದು ಅಗ್ನಿಹೋತ್ರಕ್ಕೆ ಸಮಾನವಾಗಿರುವಂತಹದ್ದು! *ಚರಕ ಸಂಹಿತೆಯ ಪ್ರಕಾರ ಸರಿಯಾಗಿ ಮಾಡಿದ ಊಟಕ್ಕೆ ಅಗ್ನಿಹೋತ್ರದ ಫಲ!*ಶುದ್ಧವಾದ ಭೋಜನಕ್ಕೆ ವೇದೋಪನಿಷತ್ತುಗಳು ಯಾವೆಲ್ಲಾ ಫಲಗಳನ್ನು ಹೇಳಿವೆ?*ಯಾರು ಊಟವನ್ನು ವಿಧಿಬದ್ಧವಾಗಿ, ಕಾಲ ಮತ್ತು ಪ್ರಮಾಣ ಬದ್ಧವಾಗಿ ಮಾಡುತ್ತಾನೋ ಅವನ ಪಾಪಗಳು ಕಳೆದುಹೋಗುತ್ತದೆ*ಗೃಹಸ್ಥನಾಗಲಿ, ಬ್ರಹ್ಮಚಾರಿಯಾಗಲಿ ಊಟ ಮಾಡದೇ ಇದ್ದರೆ ಪಾಪ ಬರುತ್ತದೆ!07-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
361
ಆಹಾರ~ಅದ್ವೈತ - ಅನ್ನಂ ಬ್ರಹ್ಮ 9 | Food as Advaita Sadhana - Annam Brahma 9
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಭೋಜನವೆಂದರೆ ಅದ್ವೈತ ಸಾಧನೆ*ಜೀವನದ ಅದ್ವೈತ ಸಾಧನೆ 'ಜೀವ-ದೇವರ ಸೇರುವಿಕೆಯಾದರೆ'; ಭೋಜನದಲ್ಲಿ 'ಜೀವ-ಜೀವರ ಸೇರುವಿಕೆ'*ನಾವು ಉಣ್ಣುವ ಊಟದಲ್ಲಿ ಯಾವುದು ನಮ್ಮೊಳಗೆ ಅದ್ವೈತವಾಗಲಿಲ್ಲವೋ, ಅದೇ ನಮಗೆ ಶತ್ರು-ರೋಗ-ಮರಣ!*ಮೊದಲು ತಿಂದಿದ್ದು ಪೂರ್ಣವಾಗಿ ಜೀರ್ಣವಾಗದೆ ಮತ್ತೆ ತಿಂದರೆ ಎಲ್ಲಾ ದೋಷಗಳೂ ತುಂಬಾ ವೇಗವಾಗಿ ಪ್ರಕೋಪಗೊಳ್ಳುತ್ತವೆ*ಜೀವವು ಜೀವವನ್ನೇ ತಿನ್ನುವುದಾದರೆ ಭೋಜನವು ಹಿಂಸೆಯೇ??*"ಅನ್ನಂ ಬ್ರಹ್ಮ"; ಸರಿಯಾಗಿ ಊಟ ಮಾಡಿದರೆ ಜೀವ-ದೇವಾದ್ವೈತವಾಗಬಹುದು*ಒಂದು ಒಳ್ಳೆಯ ಕೆಲಸವಾಗಬೇಕಾದರೆ "ತ್ಯಾಗ" ಅನಿವಾರ್ಯ*ಆಹಾರವೆಂಬುದು ದೇಹಯಂತ್ರಕ್ಕೆ ಇಂಧನ ಪೂರೈಕೆ06-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
360
ಬ್ರಹ್ಮಚರ್ಯ - ಅನ್ನಂ ಬ್ರಹ್ಮ 8 | Brahmacharya - Annam Brahma 7
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾತ, ಪಿತ್ತ, ಕಫ - ಈ ಮೂರು ದೋಷಗಳಲ್ಲಿ ಸಾಮ್ಯ ಏರ್ಪಟ್ಟರೆ ಸಂಪೂರ್ಣ "ಆರೋಗ್ಯ"*ಬ್ರಹ್ಮಚರ್ಯದಲ್ಲಿ ಎರಡು ವಿಧ: ಉಪಕುರ್ವಾಣ ಮತ್ತು ನೈಷ್ಠಿಕ*ಬ್ರಹ್ಮಚಾರಿಗಳು ಯಾವುದನ್ನು ಧಾರಣೆ ಮಾಡಬಾರದು??*ಅತ್ಯಂತ ಶೀಘ್ರವಾಗಿ ಪರಮಾತ್ಮನನ್ನು ತಲುಪುವ ಸಾಧನ: ಗಾಯತ್ರೀ ಸಾಧನೆ*ಕಲಿಯುಗದಲ್ಲಿ ಬ್ರಹ್ಮಚರ್ಯ ಆಶ್ರಮ ಮತ್ತು ವಾನಪ್ರಸ್ಥ ಆಶ್ರಮ ಎರಡೂ ಇಲ್ಲ ಎಂದು ಮಹಾನಿರ್ವಾಣ ತಂತ್ರ ಕೃತಿಯಲ್ಲಿ ಹೇಳಿರುವುದೇಕೆ?*ಆಯುರ್ವೇದದ ಪ್ರಕಾರ ಬ್ರಹ್ಮಚರ್ಯ ಎಂದರೇನು?*ಉಪನಿಷತ್ತಿನ ಪ್ರಕಾರ ಮಹಾಸುಖಕ್ಕಾಗಿ ಅಲ್ಪಸುಖವನ್ನು ತ್ಯಾಗ ಮಾಡುವುದೇ "ಬ್ರಹ್ಮಚರ್ಯ"05-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
359
ವೇಗಧಾರಣೆ - ಅನ್ನಂ ಬ್ರಹ್ಮ 7 | Mastering Vega Dharana - Annam Brahma 7
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಿದ್ದೆಯನ್ನು ಸರಿಯಾಗಿ ಮಾಡದಿರುವಾಗ ಅದು ಬದುಕಿನ "ಸುಖ ~ ಆಯುಸ್ಸು" ಎರಡನ್ನೂ ನಾಶ ಮಾಡಿಬಿಡುತ್ತದೆ*ಆತ್ಮದರ್ಶನಕ್ಕೆ ಜಾಗೃತ ಅವಸ್ಥೆಯು ಕಾಲುದಾರಿಯಾದರೆ, ಸರಿಯಾದ ನಿದ್ದೆಯು ಹೆದ್ದಾರಿ*ನಿದ್ರೆ ಸರಿಯಾಗಬೇಕಾದರೆ ಆಹಾರ-ವಿಹಾರ ಸರಿಯಾಗಿರಬೇಕು*ಶರೀರ ತಾನೇ ಏರ್ಪಡಿಸಿಕೊಳ್ಳುವ ವೇಗಗಳು ಯಾವುವು?;ಯಾವುದನ್ನು ತಡೆಹಿಡಿಯಬೇಕು?; ಯಾವುದನ್ನು ತಡೆಹಿಡಿಯಬಾರದು?*ನಾವು ಹೇಗೆ ಮಾತನಾಡಬೇಕು? ಹೇಗೆ ಮಾತನಾಡಬಾರದು?*ಗೀತೆಯ ಮಾತು: ಯುಕ್ತವಾದ ಆಹಾರ-ವಿಹಾರ, ಯುಕ್ತವಾದ ಕ್ರಿಯೆಗಳನ್ನು ಹಾಗೂ ನಿದ್ದೆಯನ್ನು ಮಾಡಿದಾಗ ಯೋಗವು ಸಿದ್ಧಿಯಾಗುತ್ತದೆ*ಮಲ-ಮೂತ್ರಗಳ ವೇಗವಿದ್ದಾಗ ಯಾವ ಕ್ರಿಯೆಯನ್ನು ಮಾಡಿದರೂ ಅದು "ದೋಷ"; ಅದನ್ನು ಹೊರಹಾಕುವುದೇ ಮೊದಲ ಕರ್ತವ್ಯ04-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
358
ಅನ್ನ~ನಿದ್ದೆಗಳ ನಂಟು - ಅನ್ನಂ ಬ್ರಹ್ಮ 6 | The Harmony of Food and Sleep - Annam Brahma 6
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಯಾವುದೇ ಉಪಾಸನೆಯ ಮೊದಲು ಉಪವಾಸ ಮಾಡಬೇಕು, ಆದರೆ "ನಿದ್ರೆ" ಎಂಬ ಪೂಜೆಯ ಮೊದಲು ಹಿತ-ಮಿತವಾದ ಆಹಾರ ಸೇವನೆ ಮಾಡಲೇಬೇಕು*ನಿದ್ರೆ ಎಂಬ ಪೂಜೆಗೆ ಪ್ರಸನ್ನತೆಯೇ ಪ್ರಸಾದ; ಅಂತರಂಗ ಮತ್ತು ಸರ್ವಾಂಗ ವಿಶ್ರಾಂತಿಯೇ ಪೂಜಾಫಲ*ಆಯುರ್ವೇದದ ಪ್ರಕಾರ ಯಾರಿಗೆಲ್ಲ ಹಗಲು ನಿದ್ರೆಗೆ ಅವಕಾಶವಿದೆ?*ರಾತ್ರಿ ನಿದ್ರೆಯನ್ನು ಸರಿಯಾಗಿ ಮಾಡಿದರೆ ಹೃದಯವು ಅರಳುತ್ತದೆ*ರಾತ್ರಿ ವೇಳೆ ಎಚ್ಚರವಿರುವುದು, ಸಂಧ್ಯಾಕಾಲ ಹಾಗೂ ಮಧ್ಯಾಹ್ನ ನಿದ್ರೆ ಮಾಡುವುದು ತುಂಬಾ ಅನರ್ಥಕ್ಕೆ ಕಾರಣವಾಗುವುದು!*ಸುಖವಾದ ನಿದ್ರೆಗೆ ಸೂತ್ರಗಳೇನು?; ಯೋಗ್ಯವಾದ ಆಹಾರ ಯಾವುದು? ಹಾಗೂ ಯಾವುದನ್ನು ಸೇವಿಸಬಾರದು?*ನಿದ್ರೆ ಹಾಗೂ ಹಸಿವಿಗೆ ಗೌರವ ಕೊಡಬೇಕು*ನಿದ್ರೆಗೆ ಪ್ರಧಾನವಾದ ವೈರಿಗಳು ಕಾಫಿ ಮತ್ತು ಚಹಾ!*ಸರಿಯಾದ ನಿದ್ರೆ ಯೋಗಸಮಾಧಿ; ಭಗವಂತನ ದರ್ಶನಕ್ಕೆ ಅದೇ ದಾರಿ!03-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
357
ನಿದ್ದೆಯೆಂಬ ಪೂಜೆ | Did You Know Your Sleep can be Worship? | ಅನ್ನಂ ಬ್ರಹ್ಮ 5 | Annam Brahma 5
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಿದ್ರೆ ಕೇವಲ ಅವಸ್ಥೆಯಲ್ಲ; ಅದೊಂದು ದೇವತೆ, ಮಾತೃಸ್ವರೂಪಿಣಿ - "ನಿದ್ರಾದೇವಿ"*ನಿದ್ರಾದೇವಿ ದಿನದ ಶ್ರಮವ ಕಳೆಯಲು ಪ್ರತಿಯೊಂದು ಜೀವಕೋಟಿಗಳ ಬಳಿಗೆ ಪ್ರತಿದಿನ ಬಂದು ಅನುಗ್ರಹಿಸುತ್ತಾಳೆ*ನಿದ್ರೆ ದೇವರ ರೂಪದಲ್ಲಿ ಬಂದಾಗ ನಾವು ಅವಳ ಪೂಜೆಯನ್ನು ಹೇಗೆ ಮಾಡಬೇಕು?*ನಿದ್ರೆ ಮಾಡುವಾಗ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಏನು ಪರಿಣಾಮ? ಹೇಗೆ ಮತ್ತು ಎಲ್ಲಿ ಮಲಗಬಾರದು?*ತಲೆಗೆ ಎಣ್ಣೆ ಹಚ್ಚಿ ಮಲಗಬಾರದು!*ನಿದ್ರೆಯ ಅವಧಿಯ ಅಗತ್ಯತೆ ಮನುಷ್ಯನ ವಯಸ್ಸನ್ನು ಅವಲಂಬಿಸಿರುತ್ತದೆ*ನಿದ್ರೆ ಸರಿಯಾದರೆ ಜೀವನದ ಮುಕ್ತಿಗೆ ಕರೆದುಕೊಂಡು ಹೋಗುತ್ತದೆ!*ನಿದ್ರಾದೇವಿ ನಮ್ಮನ್ನು ಅನುಗ್ರಹಿಸಬೇಕೆಂದರೆ ನಮ್ಮ ಊಟದ ಪ್ರಮಾಣ ಸರಿಯಾಗಿರಬೇಕು*ಹಸುವಿನ ಹಾಲನ್ನು ಮತ್ತು ಎಮ್ಮೆ ಹಾಲನ್ನು ಯಾವಾಗ ಸೇವಿಸಬೇಕು?02-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
-
356
ದೇಹ ದೇಗುಲದ ಕಂಬಗಳು | The Supporting Pillars Of The "Body-Temple" | Annam Brahma 4
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅಮೃತಕಲಶವನ್ನು ಕೈಯಲ್ಲಿ ಹಿಡಿದು, ಕೋಟಿ ಜೀವಿಗಳಿಗೆ ನಿತ್ಯವೂ ಆಹಾರ ನೀಡುವ ದೇವತೆ "ಅನ್ನಪೂರ್ಣೇಶ್ವರೀ"*ಶರೀರ ಬಂದ ದಿನದಂದು ಏನುನ್ನು ಚಿಂತನೆ ಮಾಡಬೇಕು?*ಪಾಪ ಮಾಡುವವನ ಶರೀರವು ಚಿನ್ನದ ಜಿಂಕೆಯಂತೆ; ಹೊರಗೆ 'ರಮಣೀಯ', ಒಳಗೆ 'ಮರಣೀಯ'*ತ್ರಯೋಪಸ್ತಂಭ - ಆಹಾರ, ನಿದ್ದೆ ಮತ್ತು ಬ್ರಹ್ಮಚರ್ಯ; ಇದರಲ್ಲಿ ಇದೆ ಸಂಪೂರ್ಣ ಜೀವನದ ಸಾರ*ನಮ್ಮ ದೇಹ ನಾವು ಏನು ತಿನ್ನುತ್ತೇವೆ ಮತ್ತು ಹೇಗೆ ಯೋಚಿಸುತ್ತೇವೆ ಎನ್ನುವುದರ ಪ್ರತಿಬಿಂಬ*"ಭೋಜನಕಾಲೇ ಸೀತಾಕಾಂತಃ ಸ್ಮರಣಮ್" ಎಂಬುದನ್ನು ಏಕೆ ಪಾಲಿಸಬೇಕು? ಹೇಗೆ ಸ್ಮರಿಸಬೇಕು?*ಮನವೆಲ್ಲಿಯೂ ನಮನವಲ್ಲಿಗೆ*ನಿದ್ರೆ - ಶರೀರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ತಾಯಿ; ಸಕಾಲದಲ್ಲಿ ಬಂದರೆ ವಿಷ್ಣುಮಾಯೆ, ಸಿದ್ಧಯೋಗಿನೀ, ಅಕಾಲದಲ್ಲಿ ಬಂದರೆ ಕಾಲರಾತ್ರಿ*ನಿದ್ರೆ ಧ್ಯಾನವಾಗುವುದು ಹೇಗೆ?01-08-2026ಅಶೋಕೆ, ಗೋಕರ್ಣ
-
355
ದೇಹ ದೇವರ ಕೊಡುಗೆ | ಅನ್ನಂ ಬ್ರಹ್ಮ - ಪ್ರವಚನ ಸರಣಿ - 3 | Annabrahma Chaturmasya
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮ* ಆಯ್ಕೆ - ಏನನ್ನು ತಿನ್ನಬೇಕು?;ಪ್ರಮಾಣ - ಎಷ್ಟು ತಿನ್ನಬೇಕು?;ಸಮಯ - ಯಾವಾಗ ತಿನ್ನಬೇಕು?! - ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಂಡೇ ಊಟಮಾಡಬೇಕು * ಎಷ್ಟೇ ಒಳ್ಳೆಯ ಆಹಾರವಾದರೂ ಅಕಾಲದಲ್ಲಿ ಸೇವಿಸಬಾರದು* ಮಾನವ ಶರೀರದಲ್ಲಿ ಏನೆಲ್ಲಾ ಇದೆ?; ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವೇ?* ಮಾನವನ ಆಯುಸ್ಸನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಸಾಧ್ಯವಿದೆಯೇ?* ಶರೀರ ಎನ್ನುವಂತಹದ್ದು ಶಿವಶಕ್ತಿ ನಿಕೇತನ; ವಿಷ್ಣುಲಕ್ಷ್ಮೀ ನಿಕೇತನ; ವಾಣೀಹಿರಣ್ಯಗರ್ಭ ನಿಕೇತನ* ಶರೀರ ತುಂಬಾ ಬೆಲೆಬಾಳುವಂತಹದ್ದು; ಅದನ್ನು ಕೆಡಿಸುವಂತಹ ಆಹಾರವನ್ನು ಸೇವಿಸಬಾರದು* ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ - ಪುರಂದರದಾಸರು31-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya
-
354
ಅನ್ನಂ ಬ್ರಹ್ಮ - ಪ್ರವಚನ ಸರಣಿಯ ಪೀಠಿಕೆ - 2 | Annabrahma Chaturmasya
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮಆತ್ಮಕ್ಕೆ ದೇಹ, ಇಂದ್ರಿಯಗಳು, ಮನಸ್ಸು ಪರಿವಾರ; ಹಾಗೆಯೇ ಆ ದೇಹಕ್ಕೆ ಆಹಾರ, ನಿದ್ದೆ ಪರಿವಾರಊಟ ಸರಿಯಾಗಿ ಮಾಡುವವನೇ ಆರೋಗ್ಯವಂತವಾಗ್ಭಟರ ಆಹಾರ ಸಾಧನ ಸೂತ್ರಗಳು - ಹೆಚ್ಚು ಊಟಮಾಡುವುದು ಹೇಗೆ ದೋಷವೋ; ಕಡಿಮೆ ಊಟ ಮಾಡುವುದು ಕೂಡಾ ದೋಷಅತಿಯಾದರೆ ಅಮೃತವೂ ವಿಷ..ನಾವು ಸೇವಿಸಿದ ಆಹಾರದಲ್ಲಿ ಯಾವ ಅಂಶ ಜೀರ್ಣವಾಗುವುದಿಲ್ಲವೋ ಅದೇ ಎಲ್ಲಾ ರೋಗಗಳ ಮೂಲತರಕಾರಿ ಮತ್ತು ಸೊಪ್ಪುಗಳನ್ನು ಮಿತಿತಪ್ಪಿ ಬಳಸುವುದರಿಂದ ಏನಾಗಬಹುದು?ಅನಾರೋಗ್ಯ ಮತ್ತು ದುಃಖ ಒಂದು ನಾಣ್ಯದ ಎರಡು ಮುಖಗಳುಶರೀರದ ಕುರಿತು ಶಂಕರಾಚಾರ್ಯರು ಏನು ಹೇಳಿದ್ದಾರೆ?ಹಿತಭುಕ್; ಹಿತವಾದದನ್ನು ಸೇವಿಸುವವನು, ಮಿತಭುಕ್; ಮಿತವಾಗಿ ಸೇವಿಸುವವನು,ಋತುಭುಕ್; ಸಕಾಲದಲ್ಲಿ ಸೇವಿಸುವವನು,ಅಶಾಕಭುಕ್; ಅತಿಯಾಗಿ ಸೊಪ್ಪು-ತರಕಾರಿಗಳನ್ನು ಸೇವಿಸದವನು30-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya
-
353
ಅನ್ನಂ ಬ್ರಹ್ಮ - ಪ್ರವಚನ ಸರಣಿಯ ಪೀಠಿಕೆ - 1 | ಗುರುಪೂರ್ಣಿಮೆ | Guru Purnima | Annabrahma Chaturmasya
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮಗುರು; ಯಾರು? ಗುರು ಮಾಡಬೇಕಾದ ಕಾರ್ಯ ಏನು?ಧರ್ಮದಿಂದಲೇ ಸಂಪತ್ತು; ಧರ್ಮದಿಂದಲೇ ಸುಖಜ್ಞಾನವೇ ದೊಡ್ಡದು; ಜ್ಞಾನಕ್ಕಿಂತ ದೊಡ್ಡದು ಬೇರೊಂದಿಲ್ಲ; ಭಗವಂತ ದೂರದಲ್ಲಿಲ್ಲ ಅವನು ನಮ್ಮೊಂದಿಗೇ ಅದ್ವೈತವಾಗಿದ್ದಾನೆ; ಕಣ್ತೆರೆದು ನೋಡಿ - ಶಂಕರಾಚಾರ್ಯರು ಇಡೀ ದೇಶಕ್ಕೆ ಇದನ್ನು ಸಾರಿ ಹೇಳಿದರುಶಂಕರಾಚಾರ್ಯರು ದೇಶದ ಉದ್ದಗಲಗಳಲ್ಲಿ ಮಠವನ್ನು ಏಕೆ ಸ್ಥಾಪಿಸಿದರು?ಮುಂದಿನ ದಿನಗಳಲ್ಲಿ "ಶ್ರೀಸವಾರಿ" ಜ್ಞಾನ ಪ್ರಸಾರಕ್ಕೆ, ಸರಿ ಯಾವುದು ಎಂಬುದನ್ನು ಸಾರಿ ಹೇಳುವುದಕ್ಕೆ ವೇದಿಕೆಯಾಗಲಿ ಅಕ್ಕಿ; ಸಮಸ್ತ ಆಹಾರ ಲೋಕದ ಪ್ರತಿನಿಧಿಊಟ ಸರಿಯಾಗಿ ಮಾಡಿದರೆ ರೋಗ ಬರುವುದಿಲ್ಲಅನ್ನವೇ ಬ್ರಹ್ಮ ಅನ್ನವೇ ಪರಮಾತ್ಮಸಾವಕಾಶವಾಗಿ ಊಟಮಾಡಿ; ಎಂಬುದರ ನಿಜಾವಾದ ಅರ್ಥ ಏನು?29-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya
-
352
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -19
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 18 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 25-07-2026
-
351
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -18
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 18 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 4-07-2026
-
350
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -17
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 17 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 29-06-2026
-
349
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -16
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 16 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 26-06-2026
-
348
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -15
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 15 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 25-06-2026
-
347
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -14
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 14 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 24-06-2026
-
346
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -13
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 13 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 23-06-2026
-
345
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -12
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 12 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 22-06-2026
-
344
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ -11
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 11 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna19-06-2026
-
343
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 10
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 10 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna18-06-2026
-
342
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 9
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 9 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna13-06-2026
-
341
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 8
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 8 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna12-06-2026
-
340
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 7
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 7 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna11-06-2026
-
339
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 6
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 6 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna10-06-2026
-
338
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 5
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 5 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna09-06-2026
-
337
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 4
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 4 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna 08-06-2026
-
336
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 3
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 3 A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna06-06-2026
-
335
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 2
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 2A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna05-06-2026
-
334
JeevaYaana Season 4 ~ ಜೀವಯಾನ ಪ್ರವಚನಮಾಲಿಕೆ ಸರಣಿ 4: ದಿನ - 1
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ ಅಶೋಕೆ, ಗೋಕರ್ಣ'JeevaYaana' ~ A ray of knowledge shed on the journey of life | Season 4: Day 1A series of discourses that grant vision to the life journey of students of VVVSrimad Jagadguru Shankaracharya Sri Sri Raghaveshwara Bharati MahaswamijiVishnugupta Vishwa VidyaPeetham, Ashoke, Gokarna04-06-2026
We're indexing this podcast's transcripts for the first time — this can take a minute or two. We'll show results as soon as they're ready.
No matches for "" in this podcast's transcripts.
No topics indexed yet for this podcast.
Loading reviews...
ABOUT THIS SHOW
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
HOSTED BY
SriRamachandrapura Matha
CATEGORIES
Loading similar podcasts...